Feedback / Suggestions

ಇಸ್ಪೇಟ್ ಜೂಜಾಟ ದಾಳಿ.

ದಿನಾಂಕ : 16-01-2022 ರಂದು ಕುಷ್ಟಗಿ ಪೊಲೀಸ್ ಠಾಣಾ ವ್ಯಾಪ್ತಿಯ ಚೆಳಗೇರಿ ಗ್ರಾಮದ ರಾಮಲಿಂಗೇಶ್ವರ ದೇವಸ್ಥಾನದ ಹಿಂದೆ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ಇದ್ದರೂ ಸಹ 14 ಜನ ಆರೋಪಿತರು ಅಂದರ ಬಾಹರ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀ ತಿಮ್ಮಣ್ಣ ಪಿ.ಎಸ್.ಐ ಕುಷ್ಟಗಿ ಪೊಲೀಸ್ ಠಾಣೆ ರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ ನಗದು ಹಣ 84,650=00 ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ : 15-01-2022 ರಂದು ತಾವರಗೇರಾ ಪೊಲೀಸ್ ಠಾಣಾ ವ್ಯಾಪ್ತಿಯ ಕಳ್ಳಮಳ್ಳಿ ಗುಡ್ಡದ ಹತ್ತಿರ ತುಗ್ಗಲಿ ಮರದ ಕೆಳಗಡೆ ಸಾರ್ವಜನಿಕ ಸ್ಥಳದಲ್ಲಿ ಕೋವಿಡ್-19 ಇದ್ದರೂ ಸಹ 10 ಜನ ಆರೋಪಿತರು ಅಂದರ ಬಾಹರ ಇಸ್ಪಿಟ್ ಜೂಜಾಟದಲ್ಲಿ ತೊಡಗಿದ್ದಾಗ ಶ್ರೀಮತಿ ವೈಶಾಲಿ ಝಳಕಿ ಪಿ.ಎಸ್.ಐ. ತಾವರಗೇರಾ ಪೊಲೀಸ್ ಠಾಣೆರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ ನಗದು ಹಣ 6,010=00 ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಮಟಕಾ ಜೂಜಾಟ ದಾಳಿ.

ದಿನಾಂಕ : 15-01-2022 ರಂದು ಹನಮಸಾಗರ ಪೊಲೀಸ್ ಠಾಣಾ ವ್ಯಾಪ್ತಿಯ ಯರಗೇರಿ  ಗ್ರಾಮದ ಬಸ್ ನಿಲ್ದಾಣದ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತರಾದ 1]ಮಲ್ಲಪ್ಪ ತಂದಿ ಕಳಕಪ್ಪ ಕ್ಯಾದಿಗುಪ್ಪಿ ಸಾ: ಬಾದಿಮನಾಳ 2] ಶಿವಪುತ್ರಪ್ಪ ತಂದಿ ಕಲ್ಲಪ್ಪ ಹರಿಜನ ಸಾ: ಬಂಡಿಹಾಳ 3]ಕರಿಶಿದ್ದಪ್ಪ ತಂದಿ ಶರಣಪ್ಪ ಪಲ್ಲೇದ ಸಾ: ಮುಧೋಳ ತಾ: ಯಲಬುರ್ಗಾ 4] ಶರಣಪ್ಪ ಹಾದಿಮನಿ ಸಾ: ಜೂಲಕಟ್ಟಿ ಇವರು ಮಟಕಾ ಜೂಜಾಟ ತೊಡಗಿದ್ದಾಗ ಶ್ರೀ ಅಶೋಕ ಬೇವೂರ ಪಿ.ಎಸ್.ಐ. ಹನಮಸಾಗರ ಪೊಲೀಸ್ ಠಾಣೆರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ ಆರೋಪಿತರಿಂದ ನಗದು ಹಣ 1100=00 ರೂಪಾಯಿಗಳನ್ನು ಜಪ್ತಿ ಮಾಡಿಕೊಂಡು ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ಅಕ್ರಮ ಮದ್ಯ ಮಾರಾಟ ದಾಳಿ.

ದಿನಾಂಕ : 15-01-2022 ರಂದು ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಿರೇಸಿಂಧೋಗಿ ಗ್ರಾಮದ ಆರೋಪಿತನ ಮನೆಯ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ದೇವೇಂದ್ರಪ್ಪ ತಂದೆ ಸಿದ್ದಪ್ಪ ಮಣ್ಣಮ್ಮನವರ ಸಾ: ಹಿರೇಸಿಂದೋಗಿ ಇತನು ಯಾವುದೇ ಪರವಾನಿಗೆ ಮತ್ತು ದಾಖಲಾತಿ ಇಲ್ಲದೇ ಅನಧಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ಶ್ರೀ ಶೈಲಾ ಎಸ್. ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆರವರು ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ 11,851=00 ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿ ಆರೋಪಿತರು ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ : 15-01-2022 ರಂದು ಕೊಪ್ಪಳ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕೊಪ್ಪಳ ನಗರದ ಬಸ್ ನಿಲ್ದಾಣದ ಎದುರಿಗೆ ರೈಲ್ವೇ ಸ್ಟೇಷನ್ ರಸ್ತೆಯ ಬಾಜು ಇರುವ ಗ್ರ್ಯಾಂಡ್ ಪ್ಯಾಲೇಸ್ ಲಾಡ್ಜದಲ್ಲಿ ಆರೋಪಿತರಾದ [1] ವಿನೋದ ತಂದೆ ವೆಂಕಪ್ಪ ಚಿಲವಾರಿ ಸಾ: ದೇವರಾಜ ಅರಸ ಕಾಲೋನಿ ಕೊಪ್ಪಳ [2] ಅಬ್ದುಲ್ ಜೀಲಾನ ತಂದೆ ಮೈನುದ್ದಿನಸಾಬ ಪೈಮಾಸಿ ಸಾ: ಕುವೆಂಪು ನಗರ ಕೊಪ್ಪಳ ಇವರು ಮಾನ್ಯ ಸರ್ಕಾರದ ಹಾಗೂ ಮಾನ್ಯ ಜಿಲ್ಲಾಧಿಕಾರಿಗಳ ವಿಕೆಂಡ್ ಲಾಕಡೌನ್ ಕರ್ಫೂ ಆದೇಶವಿದ್ದು ಸಹ ಉಲ್ಲಂಘಿಸಿ ಅನಧಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ಶ್ರೀ ಮಾರುತಿ ಗುಳ್ಳಾರಿ ಪಿ.ಐ. ಕೊಪ್ಪಳ ನಗರ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿ ಪಂಚರೊಂದಿಗೆ ಹೋಗಿ ದಾಳಿ ಮಾಡಿ 5,413=00 ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

ದಿನಾಂಕ : 15-01-2022 ರಂದು ಅಳವಂಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹಟ್ಟಿ ಗ್ರಾಮದ ಆರೋಪಿತನ ಕಿರಾಣಿ ಅಂಗಡಿ ಮುಂದೆ ಸಾರ್ವಜನಿಕ ಸ್ಥಳದಲ್ಲಿ ಆರೋಪಿತನಾದ ಶಿವಪ್ಪ ತಂದೆ ಮರಿಯಪ್ಪ ಮಲ್ಲಣ್ಣನವರ ಸಾ: ಹಟ್ಟಿ ಇತನು ಯಾವುದೇ ಪರವಾನಿಗೆ ಮತ್ತು ದಾಖಲಾತಿ ಇಲ್ಲದೇ ಅನಧಿಕೃತವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದಾಗ ಶ್ರೀ ಶೈಲಾ ಎಸ್. ಪಿ.ಎಸ್.ಐ. ಅಳವಂಡಿ ಪೊಲೀಸ್ ಠಾಣೆರವರು ಹಾಗೂ ಸಿಬ್ಬಂದಿ ಹಾಗೂ ಪಂಚರೊಂದಿಗೆ ಹೋಗಿ ದಾಳಿ ಮಾಡಿ 1,165=00 ರೂ ಬೆಲೆಬಾಳುವ ಮದ್ಯವನ್ನು ಜಪ್ತಿ ಮಾಡಿ ಆರೋಪಿತರ ಮೇಲೆ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದು ಇರುತ್ತದೆ.

Last Updated: 16-01-2022 12:09 PM Updated By: Admin


Disclaimer :

Please note that this page also provides links to the websites / web pages of Govt. Ministries/Departments/Organisations.The content of these websites are owned by the respective organisations and they may be contacted for any further information or suggestion

Website Policies

  • Copyright Policy
  • Hyperlinking Policy
  • Security Policy
  • Terms & Conditions
  • Privacy Policy
  • Help
  • Screen Reader Access
  • Guidelines

Visitors

  • Last Updated​ :
  • Visitors Counter :
  • Version :
CONTENT OWNED AND MAINTAINED BY : Koppal District Police
Designed, Developed and Hosted by: Center for e-Governance - Web Portal, Government of Karnataka © 2023, All Rights Reserved.

Best viewed in Chrome v-87.0.4280.141, Microsoft Edge v-87.0.664.75, Firefox -v-83.0 Browsers. Resolution : 1280x800 to 1920x1080